ಶ್ರೀಕೃಷ್ಣ ಪ್ರಾಪರ್ಟಿಸ್ & ಪ್ರಮೋಟರ್ಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ ‘ಪಂಡಿತ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಕೃಷ್ಣೇಂದ್ರ ಪಂಡಿತ್ ಸಂಗೀತವನ್ನು ನೀಡಿ, ನೃತ್ಯ ನಿರ್ದೆಶನವನ್ನು ಮಾಡಿದ್ದಾರೆ. ಚಿತ್ರದ ನಿರ್ಮಾಪಕರೂ ಆಗಿರುವ ಕೃಷ್ಣೇಂದ್ರ ಪಂಡಿತ್ ಈ ಚಿತ್ರದ ಗಾಯಕರು ಹೌದು. ಸುರೇಶ್ಬಾಬು, ಮನೋಹರ್ ಛಾಯಾಗ್ರಹಣ ಹಾಗೂ ಜೋ.ನಿ.ಹರ್ಷ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣೇಂದ್ರ ಪಂಡಿತ್, ಮೆಘಶ್ರೀ, ದೀಪ, ಮಲ್ಲೇಶ್ ಎಡೆಹಳ್ಳಿ ಮುಂತಾದವರಿದ್ದಾರೆ.